ಮನೆಯ ಕಿಟಕಿ ಬಾಗಿಲು ತೆರೆದಿಡಿ, ಸ್ವಚ್ಛ ಗಾಳಿ ಬರುತ್ತಿದ್ದರೆ ಕರೋನಾ ಅಪಾಯ ಇಲ್ಲ

ನವದೆಹಲಿ : ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ, ಸರ್ಕಾರವು ಸರಳ ಎಡ್ವೈಸರಿ ಜಾರಿ ಮಾಡಿದೆ.  ಇದರಲ್ಲಿ, ಕರೋನಾ ವೈರಸ್ ನ ಏರೋಸೆಲ್ ಗಳು ಗಾಳಿಯಲ್ಲಿ  10 ಮೀಟರ್ ವರೆಗೆ ತೇಲುತ್ತವೆ ಎಂದು ಹೇಳಿದೆ.  ಸರ್ಕಾರದ  ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ (Vijay Raghavan) ಕಚೇರಿ ಗುರುವಾರ  ಅಡ್ವೈಸರಿ ಜಾರಿ ಮಾಡಿದೆ. ಕೋವಿಡ್ -19 (Covid-19) ನಿಂದ ಬಳಲುತ್ತಿರುವ ವ್ಯಕ್ತಿಯ ಸೀನಿದಾಗ ಬಹೊರಹೊಮ್ಮುವಾಗ ಡ್ರಾಪ್ ಲೆಟ್ ಗಳು,  ಎರಡು ಮೀಟರ್ ವ್ಯಾಪ್ಯಿಯೊಳಗೆ ಬೀಳುತ್ತವೆ. ಆದರೆ ಅದರಿಂದ ಹೊರಹೊಮ್ಮುವ ಏರೋಸಾಸೆಲ್ ಗಳು  10 ಮೀಟರ್‌ಗಳಷ್ಟು ದೂರದಲ್ಲಿ ಇರಬಹುದು ಎಂದು ಅಡ್ವೈಸರಿಯಲ್ಲಿ ಹೇಳಲಾಗಿದೆ.

ಪ್ರಧಾನ ವೈಜ್ಞಾನಿಕ ಸಲಹೆಗಾರರ ​​ಕಚೇರಿ ತನ್ನ ‘ಈಜಿ ಟು ಫಾಲೋ ” ಅಡ್ವೈಸರಿಯಲ್ಲಿ ಸೋಂಕು ಹರಡುವುದನ್ನು ನಿಲ್ಲಿಸಿ, ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಿ,  SARS-CoV-2 ವೈರಸ್ ಹರಡುವುದನ್ನು ತಡೆಯಲು ಮಾಸ್ಕ್ (Mask) ಧರಿಸಿ, ಸಾಮಾಜಿಕ ಅಂತರ (Social distancing) ಕಾಪಾಡಿ ಮತ್ತು ನೈರ್ಮಲ್ಯದತ್ತ ಗಮನಹರಿಸುವಂತೆ ಹೇಳಿದೆ. ಅಲ್ಲದೆ, ಮುಕ್ತ ವಾತಾವರಣವನ್ನು ಬಳಸುವಂತೆ ಹೇಳಿದೆ.

ಅಡ್ವೈಸರಿಯ ಮುಖ್ಯಾಂಶಗಳು :
– ಕೋವಿಡ್ -19 (COVID-19) ವೈರಸ್ ಹರಡುವುದನ್ನು ಕಡಿಮೆ ಮಾಡುವಲ್ಲಿ ಸ್ವಚ್ಛ ಗಾಳಿ ಮತ್ತು ತೆರೆದ ವಾತಾವರಣ ಪ್ರಮುಖ ಪಾತ್ರ ವಹಿಸುತ್ತದೆ. ಮುಕ್ತ ವಾತಾವರಣದಲ್ಲಿ  ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸೋಂಕು ಹರಡುವ ಅಪಾಯವೂ ಕಡಿಮೆ.

– ಸೀನುವ ಸಂದರ್ಭದಲ್ಲಿ ವೈರಸ್ (Virus) ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೀನುವಾಗ  ಹೊರಬರುವ ಡ್ರಾಪ್ ಲೆಟ್ ನೆಲದ ಮೇಲೆ ಬೀಳುತ್ತವೆ. ಆದರೆ ಅದರ ಸಣ್ಣ ಕಣಗಳು ಗಾಳಿಯಲ್ಲಿ ಬಹಳ ದೂರದವರೆಗೆ ಹೋಗುತ್ತದೆ.

– ಗಾಳಿಯ ಪ್ರಸರಣವಿಲ್ಲದ ಸ್ಥಳಗಳಲ್ಲಿ, ಸೋಂಕಿತ ಹನಿಗಳು ಕೇಂದ್ರೀಕೃತವಾಗಿರುತ್ತವೆ ಮತ್ತು ಇದು ಆ ಪ್ರದೇಶದ ಜನರಲ್ಲಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

– ಸೋಂಕಿತ ವ್ಯಕ್ತಿಯ ಮೂಗಿನಿಂದ ಹೊರಬರುವ ಹನಿಗಳು (Droplets) ಎರಡು ಮೀಟರ್ ಪ್ರದೇಶದಲ್ಲಿ ಬೀಳಬಹುದು ಮತ್ತು ಹೆಚ್ಚು ಸಣ್ಣ ಹನಿಗಳು ಗಾಳಿಯ ಮೂಲಕ ಹತ್ತು ಮೀಟರ್ ವರೆಗೆ ಹೋಗಬಹುದು.

– ಹಿಂದಿನ ಪ್ರೋಟೋಕಾಲ್ ಪ್ರಕಾರ, ಸೋಂಕನ್ನು ತಡೆಗಟ್ಟಲು ಆರು ಅಡಿಗಳಷ್ಟು ಅಂತರವನ್ನು ಕಾಪಾಡುವುದು ಅಗತ್ಯ ಎಂದು ಹೇಳಲಾಗಿತ್ತು. ಆದರೆ ಯಾರ ಸಂಪರ್ಕಕ್ಕೂ ಬಾರದೇ ಹೋದರೂ ಸೋಂಕಿಗೆ ಒಳಗಾಗಿರುವ ಬಗ್ಗೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ (Social media) ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇವರುಗಳು ಇದ್ದ ಸ್ಥಳಗಳಲ್ಲಿ ಸ್ವಚ್ಛ ಗಾಳಿ ಬರುತ್ತಿದ್ದರೆ ಸೋಂಕಿನಿಂದ ರಕ್ಷಣೆಯಾಗಿರುತ್ತಿತ್ತು ಎನ್ನಲಾಗಿದೆ.

– ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದರೆ ಮತ್ತು ಎಕ್ಸಾಸ್ಟಿಂಗ್ ಫ್ಯಾನ್ ಹಾಕಿದರೆ ಯಾವ ರೀತಿ ಕೆಟ್ಟ ವಾಸನೆಗಳು ಕಡಿಮೆಯಾಗುತ್ತದೆಯೋ ಅದೇ ರೀತಿ, ಹೊರಗಿನ ಸ್ವಚ್ಛ ಗಾಳಿ ಬರುತ್ತಿದ್ದರೆ ವೈರಸ್ ಗಳ ಸಂಖ್ಯೆ ಕಡಿಮೆಯಾಗುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *