ವಿಡಿಯೋ ಕಾಲ್ ಮೂಲಕ ಜೂ.ಚಿರುಗೆ ಆಂಜನೇಯನ ದರ್ಶನ ಮಾಡಿಸಿದ ಅರ್ಜುನ್ ಸರ್ಜಾ

ಹೈಲೈಟ್ಸ್‌:

  • ಆಂಜನೇಯನ ದರ್ಶನ ಮಾಡಿದ ಜೂ.ಚಿರು
  • ಜೂ.ಚಿರುಗೆ ಆಂಜನೇಯನ ದರ್ಶನ ಮಾಡಿಸಿದ ಅರ್ಜುನ್ ಸರ್ಜಾ
  • ಕೋವಿಡ್ ಕಾರಣದಿಂದ ಆಂಜನೇಯ ದೇಗುಲದ ಉದ್ಘಾಟನೆ ಸಮಾರಂಭಕ್ಕೆ ಗೈರಾಗಿದ್ದ ಮೇಘನಾ ರಾಜ್ ಕುಟುಂಬ

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಚೆನ್ನೈನಲ್ಲಿ ಆಂಜನೇಯನ ದೇವಾಲಯವನ್ನು ನಿರ್ಮಿಸಿದ್ದಾರೆ. ಮೊನ್ನೆಮೊನ್ನೆಯಷ್ಟೇ ಆಂಜನೇಯನ ದೇಗುಲವನ್ನು ಲೋಕಾರ್ಪಣೆ ಮಾಡಲಾಯಿತು. ಜುಲೈ 1 ರಂದು ಕುಂಭಾಭಿಷೇಕ ಕಾರ್ಯಕ್ರಮ, ಪೂಜೆ, ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಆಂಜನೇಯ ದೇವಸ್ಥಾನದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು.

ಕೋವಿಡ್ ಕಾರಣದಿಂದಾಗಿ ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚು ಜನ ಸೇರಲು ಅವಕಾಶವಿರಲಿಲ್ಲ. ಹೀಗಾಗಿ ಉದ್ಘಾಟನಾ ಸಮಾರಂಭವನ್ನು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಸ್ಟ್ರೀಮ್ ಮಾಡಲಾಯಿತು.

ಆಂಜನೇಯ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಅರ್ಜುನ್ ಸರ್ಜಾ, ಪುತ್ರಿ ಐಶ್ವರ್ಯ ಸರ್ಜಾ, ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಸೇರಿದಂತೆ ಇಡೀ ಸರ್ಜಾ ಕುಟುಂಬ ಭಾಗವಹಿಸಿತ್ತು. ಆದರೆ, ಈ ಸಮಾರಂಭಕ್ಕೆ ಮೇಘನಾ ರಾಜ್, ಜೂ.ಚಿರು ಭಾಗವಹಿಸಿರಲಿಲ್ಲ. ಕೋವಿಡ್ ಕಾರಣದಿಂದಾಗಿ ಮೇಘನಾ ರಾಜ್ ಮತ್ತು ಕುಟುಂಬ ಸಮಾರಂಭಕ್ಕೆ ಗೈರಾಗಿದ್ದರು.

ಆಂಜನೇಯ ದೇಗುಲದ ಉದ್ಘಾಟನೆ ಸಮಾರಂಭಕ್ಕೆ ಗೈರಾದ ಹಿನ್ನಲೆಯಲ್ಲಿ ಜೂ.ಚಿರುಗೆ ಚೆನ್ನೈನಿಂದ ಅರ್ಜುನ್ ಸರ್ಜಾ ವಿಡಿಯೋ ಕಾಲ್ ಮಾಡಿದ್ದಾರೆ. ವಿಡಿಯೋ ಕಾಲ್ ಮೂಲಕ ಜೂ.ಚಿರುಗೆ ಆಂಜನೇಯನ ದರ್ಶನವನ್ನು ಮಾಡಿಸಿದ್ದಾರೆ ಅರ್ಜುನ್ ಸರ್ಜಾ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಟ ಅರ್ಜುನ್ ಸರ್ಜಾ ಬರೆದುಕೊಂಡಿದ್ದಾರೆ.

ಜೂ.ಚಿರು ಜೊತೆಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ ಸ್ಕ್ರೀನ್ ಶಾಟ್‌ಅನ್ನು ಶೇರ್ ಮಾಡಿ, ”ಜೂ.ಚಿರುಗಾಗಿ ದೇವಸ್ಥಾನದ ಟೂರ್. ಕೊರೊನಾ ಕಾರಣದಿಂದ ಕುಂಭಾಭಿಷೇಕದಲ್ಲಿ ಅವರು ಭಾಗಿಯಾಗಲು ಸಾಧ್ಯವಾಗಲಿಲ್ಲ” ಎಂದು ಅರ್ಜುನ್ ಸರ್ಜಾ ಬರೆದುಕೊಂಡಿದ್ದಾರೆ.


S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *