ದಾವಣಗೆರೆ: ಅಡುಗೆ ಸಹಾಯಕಿ ಜತೆ ಸೆಲ್ಫಿ ತೆಗೆದ ಶಿಕ್ಷಕ ಅಮಾನತು

ಜಗಳೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಬಿಸಿಯೂಟ ತಯಾರಕಿಯ ಜತೆ ಸೆಲ್ಫಿ ಫೋಟೋ ತೆಗೆದು ಜಾಲತಾಣಕ್ಕೆ ಅಫ್‌ಲೋಡ್‌ ಮಾಡಿದ ಹಿನ್ನೆಲೆ ಶಿಕ್ಷಣ ಇಲಾಖೆ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ತಾಲೂಕಿನ ಗೊಗುದ್ದು ಗ್ರಾಮದ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಕನ್ನಡ ಶಿಕ್ಷಕ ಆಂಜನೇಯ ನಾಯ್ಕ್ ಅಮಾನತು ಗೊಂಡವರು. ಈ ಶಿಕ್ಷಕ ಶಾಲೆಯಲ್ಲಿ ಮುಖ್ಯ ಅಡುಗೆ ಸಹಾಯಕಿಯೊಬ್ಬರ ಜತೆ ಫೆ.15 ರಂದು ಸೆಲ್ಫಿ ತೆಗೆದುಕೊಂಡಿದ್ದ. ಅಲ್ಲದೇ ವಿದ್ಯಾರ್ಥಿಗಳ ಕೈಯಿಂದ ತಂಬಾಕು, ಗುಟ್ಕಾ ತರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಬಿಸಿಯೂಟ ತಯಾರಕಿ ಶಕೀನಾಭೀ ಎಂಬುವರು ಶಿಕ್ಷಕನ ದುರ್ವತನೆ ಬಗ್ಗೆ ಮೇ 23 ರಂದು ಜಗಳೂರು ಠಾಣೆಯಲ್ಲಿ ದೂರು ದಾಖಲಿಸಿ, ಶಿಕ್ಷಣ ಸಚಿವರು ಮತ್ತು ಇಲಾಖಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಈ ಹಿನ್ನಲೆ ಶಿಕ್ಷಣ ಸಚಿವರು ಇಲಾಖೆ ಉಪನಿರ್ದೇಶಕರಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದರು. ಪರಿಶೀಲನೆ ನಡೆಸಿದಾಗ ಶಿಕ್ಷಕನ ಸೇವಾ ನಡತೆ ಉಲ್ಲಂಘನೆಯಾಗಿದ್ದು, ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಬಿಇಒ ದಿದ್ದಿಗೇರ ಮಂಜಪ್ಪ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *