ಸುಮಲತಾ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನನಗಾಗಲೀ , ಪಕ್ಷದವರಿಗಾಗಲೀ ಇಲ್ಲ: ಸಾರಾ ಮಹೇಶ್​

ಸಂಸದೆ ಸುಮಲತಾ ರವರು ತಮ್ಮ ಗಂಡ ಅಂಬರೀಶ್​ ಹೆಸರು ಸಹ ಹೇಳಲು ಯಾರಿಗೂ ಯೋಗ್ಯತೆ ಇಲ್ಲ ಎಂದು ಮಾಧ್ಯಮದ ಮುಂದೆ ಗುಡುಗಿದ್ದರು. ಈ ವಿಚಾರ ಸಂಬಂಧ ಇದೀಗ ಸಾರಾ ಮಹೇಶ್ ಪ್ರತಿಕ್ರಿಯಿಸಿದ್ದು, ಸಂಸದೆ ಸುಮಲತಾ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನನಗಾಗಲೀ , ನಮ್ಮ ಪಕ್ಷದವರಿಗಾಗಲೀ ಇಲ್ಲ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸಾರಾ ಮಹೇಶ್​ ನಮ್ಮ ಕ್ಷೇತ್ರದ ಸಂಸದೆ, ದಿ ಅಂಬರೀಶ್​ ಅವರ ಧರ್ಮಪತ್ನಿ ಸುಮಲತಾ  ಕ್ಷೇತ್ರದಲ್ಲಿ ಕೋವಿಡ್​ ನಂತರ  ಭೇಟಿ ಕೊಟ್ಟು ಕೆಲಸ ಮಾಡುವ ಮೂಲಕ ಬ್ಯುಸಿಯಾಗಿದ್ದಾರೆ. ಹೀಗಾಗಿ ಸುಮಲತಾ ಬಗ್ಗೆ ಮಾತನಾಡಬೇಡಿ ಎಂದು ಕುಮಾರಣ್ಣನ ಬಳಿ ಮನವಿ ಮಾಡಿದ್ದೇನೆ ಎಂದಿದ್ದಾರೆ.

ಇದೆ ವೇಳೆ ಮಾತನಾಡಿದ ಸಾರಾ ರವರು ಕೆ ಆರ್​ ಎಸ್​ ಡ್ಯಾಂ ನಲ್ಲಿ ಬಿರುಕು ಬಿಟ್ಟಿದೆ ಎಂದರೆ ಆ ವಿಚಾರಕ್ಕೆ ಸಂಬಂಧಿಸಿದಂತೆ ಅವರೇ ಹೊಗಿ ಪರಿಶೀಲನೆ ಮಾಡಬೇಕಿತ್ತೇ ಹೊರತು ಈ ರೀತಿ ಯಾರದ್ದೋ ಮಾತನ್ನು ಕೇಳಿ, ಬಿರುಕಿನ ಬಗ್ಗೆ ಮಾತನಾಡಬಾರದಿತ್ತು. ಕೃಷ್ಣರಾಜ ಸಾಗರ ಕೇವಲ ಕಟ್ಟೆಯಲ್ಲ, ಅದು ಮೈಸೂರು ಮತ್ತು  ಮಂಡ್ಯ ಜಿಲ್ಲೆಯ ಜನರ ದಿನನಿತ್ಯದ ಜೀವನಾಡಿ ಎಂದು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *