ಸೇವ್​ ಕೆಆರ್​​ಎಸ್​​ ಡ್ಯಾಂ, ಸ್ಟಾಪ್​ ಇಲ್ಲೀಗಲ್​ ಮೈನಿಂಗ್, ಅಭಿಯಾನ ಶುರು ಮಾಡಿದ ಸುಮಲತಾ..!

ಕೆಆರ್​ಎಸ್​ ಡ್ಯಾಂ ಬಿರುಕು ಬಿಟ್ಟಿರುವ ವಿಚಾರಕ್ಕೆ ಮತ್ತು ಬೇಬಿ ಬೆಟ್ಟದಲ್ಲಿ ನಡೆಯುತ್ತಿರವ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಕ್ಕೆ ಹಲವು ಅಡ್ಡಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಂಸದೆ ಸುಮಲತಾ ರವರು ತಮ್ಮ ಟ್ಟಿಟರ್​ ಖಾತೆಯಲ್ಲಿ ಆಕ್ರೋಷವನ್ನ ವ್ಯಕ್ತ ಪಡಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ನಡುವಿನ ಜಗಳ ಹಲವು ಬಣ್ಣಗಳನ್ನು ಪಡೆದಿದ್ದು, ಇಡೀ ದೇಶವೇ ರಾಜ್ಯದ ಕಡೆ ತಿರುಗಿ ನೋಡವಷ್ಟರ ಮಟ್ಟಿಗೆ ಪ್ರಕರಣ ಉಲ್ಬಣವಾಗಿದೆ. ಇಬ್ಬರಲ್ಲಿ ಒಬ್ಬರೂ ಜಗಳಕ್ಕೆ ಅಂತ್ಯ ವಾಡಲು ಸಿದ್ದವಾಗಿಲ್ಲದಂತಹ ಪರಿಸ್ಥಿತಿ ಇದೆ.

ಇದೀಗ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಟ್ಟೀಟ್​ ಮಾಡಿರುವ ಸುಮಲತಾ, ಸೇವ್​ ಕೆಆರ್​ಎಸ್​​ ಡ್ಯಾಂ, ಸ್ಟಾಪ್​ ಇಲ್ಲೀಗಲ್​ ಮೈನಿಂಗ್​ ಎಂಬ ಹ್ಯಾಷ್​ಟ್ಯಾಗ್​ ಮೂಲಕ ಅಭಿಯಾನವನ್ನ ಪ್ರಾರಂಭಿಸಿದ್ದಾರೆ.

 

ಹಾಗೂ ಇದರ ಜೊತೆಗೆ ತಮ್ಮ ಟ್ವಿಟರ್​ ಖಾತೆಯಲ್ಲಿ  ’ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಕೆಲವರು ಮಹಿಳೆಯರು ಅಧಿಕಾರದಲ್ಲಿರುವುದನ್ನು ಸಹಿಸಿಕೊಳ್ಳಲಾರರು. ಭ್ರಷ್ಟರು, ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ, ಒತ್ತಡ, ಕಿರುಕುಳ ಕೊಡಬಲ್ಲರು. ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರುವುದಿಲ್ಲ’  ಎಂದು ಟ್ವೀಟ್​ ಮೂಲಕ    ತಮ್ಮ ವಿರುದ್ಧದ ಇತ್ತೀಚೆಗಿನ ಎಲ್ಲಾ ಬೆಳವಣಿಗೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *