ರಾಜ್ಯದಲ್ಲಿ ಸೋಂಕು, ಸಾವಿನ ಸಂಖ್ಯೆ ತುಸು ಇಳಿಕೆ
ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ತುಸು ಇಳಿಕೆಯಾಗಿದೆ.
ಇಂದೂ ಕೂಡಾ ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಯಾವುದೇ ಸೋಂಕು ಪ್ರಕರಣಗಳು ದೃಢಪಟ್ಟಿಲ್ಲ. ಉಳಿದಂತೆ ಹಲವು ಜಿಲ್ಲೆಗಳಲ್ಲಿ ಹತ್ತರ ಒಳಗೆ ಸೋಂಕು ದಾಖಲಾಗಿದೆ
ರಾಜ್ಯದಲ್ಲಿ ಸೋಂಕಿನ ಶೇಕಡಾವಾರು ಪ್ರಮಾಣ ಶೇ. 1.59 ಹೆಚ್ಚಾಗಿದೆ.ಜೊತೆಗೆ ಸಾವಿನ ಪ್ರತಿಶತ ಶೇ.2.26 ಕ್ಕೆ ಕುಸಿದಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ 1990 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 45 ಮಂದಿ ಸಾವನ್ನಪ್ಪಿದ್ದಾರೆ.ಜೊತೆಗೆ 2,537 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ
ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 28,76,586 ಮಂದಿಗೆ ಏರಿಕೆಯಾಗಿದೆ.ಇಲ್ಲಿಯ ತನಕ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,06,933 ಕ್ಕೆ ಹೆಚ್ಚಳವಾಗಿದೆ .
ಜೊತೆಗೆ 35,989 ಮಂದಿ ಒಟ್ಟಾರೆಯಾಗಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ
ಹಲವು ಜಿಲ್ಲೆಗಳಲ್ಲಿ ನಿನ್ನೆಗಿಂತ ಸೋಂಕು ತುಸು ಏರಿಕೆಯಾಗಿದ್ದು ಇನ್ನೂ ಕೆಲವು ಜಿಲ್ಲೆಗಳಲ್ಲಿ ನಿನ್ನೆಗಿಂತ ಕಡಿಮೆ ಸೋಂಕಿನ ಸಂಖ್ಯೆ ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಹೆಚ್ಚಳ
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಗಿಂತ ಸೋಂಕು ಏರಿಕೆಯಾಗಿದ್ದು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಇಂದು 400 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 8 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ 490 ಮಂದಿ ಚೇತರಿಸಿಕೊಂಡಿದ್ದಾರೆ.
1.24ಲಕ್ಷ ಪರೀಕ್ಷೆ:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 124,494 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯ ತನಕ 3,62,93,105ಕ್ಕೆ ಏರಿಕೆಯಾಗಿದೆ ಆರೋಗ್ಯ ಇಲಾಖೆ ತಿಳಿಸಿದೆ
ಇಂದಿನ ಸೋಂಕು ಸಂಖ್ಯೆ
ಜಿಲ್ಲೆ ಎಷ್ಟು
- ಬಾಗಲಕೋಟೆ – 4
- ಬಳ್ಳಾರಿ – 16
- ಬೆಳಗಾವಿ – 140
- ಬೆಂಗಳೂರು ಗ್ರಾಮಾಂತರ- 40
- ಬೆಂಗಳೂರು ನಗರ. – 400
- ಬೀದರ್ – 2
- ಚಾಮರಾಜನಗರ – 41
- ಚಿಕ್ಕಬಳ್ಳಾಪುರ – 23
- ಚಿಕ್ಕಮಗಳೂರು -94
- ಚಿತ್ರದುರ್ಗ – 4
- ದಕ್ಷಿಣ ಕನ್ನಡ – 219
- ದಾವಣಗೆರೆ -20
- ಧಾರವಾಡ -18
- ಗದಗ – 7
- ಹಾಸನ – 175
- ಹಾವೇರಿ – 10
- ಕಲಬುರಗಿ- 14
- ಕೊಡಗು – 42
- ಕೋಲಾರ -40
- ಕೊಪ್ಪಳ -10
- ಮಂಡ್ಯ – 69
- ಮೈಸೂರು – 211
- ರಾಯಚೂರು -1
- ರಾಮನಗರ – 17
- ಶಿವಮೊಗ್ಗ – 99
- ತುಮಕೂರು – 78
- ಉಡುಪಿ – 120
- ಉತ್ತರ ಕನ್ನಡ – 69
- ವಿಜಯಪುರ – 7
- ಯಾದಗಿರಿ- 0