Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ

ನಿಮ್ಮ ಹೊಸ ಯೋಜನೆಗಳಿಗೆ ಚಾಲನೆ ನೀಡುವ ವಿಚಾರವನ್ನು ಸ್ವಲ್ಪ ದಿನ ಮುಂದಕ್ಕೆ ತಳ್ಳುವುದು ಸೂಕ್ತ. ಅನಿವಾರ್ಯದ ಪ್ರಯಾಣಗಳು ಹೆಚ್ಚಾಗಲಿದೆ. ಆಫೀಸಿನಲ್ಲಿ ಸಂತೋಷದ ವಾತಾವರಣ ನಿಮ್ಮಿಂದ ಸೃಷ್ಟಿಯಾಗಲಿದೆ. ಖರ್ಚು ಕಡಿಮೆ ಮಾಡುವುದನ್ನು ಅಭ್ಯಾಸಿಸಿ.

ಸಂಸಾರದ ವಿಷಯಗಳತ್ತ ಗಮನ ಹರಿಸುವಿರಿ. ಆಫೀಸಿನಲ್ಲಿ ಮಹತ್ವದ ಯೋಜನೆಯೊಂದಕ್ಕೆ ನಿಮ್ಮ ಸೃಜನಾತ್ಮಕ ಕಲೆಯನ್ನು ಉಪಯೋಗಿಸಿ ಕೊಳ್ಳುವರು, ಅದರ ಫಲವಾಗಿ ಅಧಿಕಾರಿಗಳಿಗೆ ಗಮನಾರ್ಹ ವ್ಯಕ್ತಿಯಾಗುವಿರಿ. ಸಹವರ್ತಿಗಳು ನಿಮ್ಮ ಬೆಂಬಲಕ್ಕೆ ಬರುವರು

ವೃತ್ತಿ ಅಥವಾ ಕೆಲಸಗಳಲ್ಲಿ ಬದಲಾವಣೆ ಸನ್ನಿಹಿತವಾಗಲಿದೆ. ಸಮಾನ ಮನಸ್ಕರಲ್ಲಿ ಒಪ್ಪಂದದಲ್ಲಿ ವ್ಯವಹಾರಗಳನ್ನು ಮಾಡುತ್ತಿರುವವರ ಸಂಘದಲ್ಲಿ ಮಾನಸಿಕ ಭಿನ್ನಾಭಿಪ್ರಾಯಗಳು ಉದ್ಭವವಾಗಲಿದೆ. ಸ್ನೇಹಿತರೊಂದಿಗೆ ಕ್ಲಿಷ್ಟಕರ ಕ್ಷಣಗಳನ್ನು ಕಳೆಯುವಂತಾಗಲಿದೆ

ನಿಮ್ಮಲ್ಲಿ ಹೆಚ್ಚಿನ ಕ್ರಿಯಾತ್ಮಕ ಶಕ್ತಿ ಇದೆ ಆದರೆ ಕೆಲಸಗಳು ಕಾರ್ಯಗತವಾಗಲು ಆತುರ ತೋರಬೇಡಿ. ಏಕಮುಖ ಪ್ರತಿಭೆಯನ್ನು ನಾಶಮಾಡಿ ಇನ್ನಿತರೇ ವಿಷಯಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿ. ಷೇರು ದಲ್ಲಾಳಿಗಳಿಗೆ ತೃಪ್ತಿಕರ ದಿನವಾಗುವುದು.

ಕೆಲಸದಲ್ಲಿ ಒತ್ತಡ ಹೆಚ್ಚಿರುವುದರಿಂದ ಅತಿಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ. ಆಕಸ್ಮಿಕ ಧನಲಾಭ ಉಂಟಾಗಲಿದೆ. ಹೊಸ ಜವಾಬ್ದಾರಿಯೊಂದನ್ನು ವಹಿಸಿ ಕೊಳ್ಳಬೇಕಾಗುವುದು. ಪ್ರಾಮಾಣಿಕ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳವಿರಲಿದೆ

ಜಟಿಲವಾದ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಕ್ತ ಸಲಹೆಯನ್ನು ಮಾರ್ಗದರ್ಶಕರಲ್ಲಿ ಕೇಳಿ ತಿಳಿಯುವುದು ಉತ್ತಮ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ. ಮನೆಯಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೂರಾಗುವುದು. ಕಬ್ಬಿಣ ವ್ಯಾಪಾರಸ್ಥರಿಗೆ ಆಶಾದಾಯಕ ದಿನ.

ನಿಮ್ಮ ಯೋಜನೆಗಳು ಕಾರ್ಯಗತ ಗೊಳ್ಳವುದರ ಬಗ್ಗೆ ಶನೈಶ್ಚರನಲ್ಲಿ ಪೂಜೆ ಪ್ರಾರ್ಥನೆ ನೆಡೆಸುವುದು ಉತ್ತಮ. ಮದುವೆ ಕೆಲಸಗಳಿಗಾಗಿ ಓಡಾಟ ನಡೆಸುವಿರಿ. ಹೆಚ್ಚಿನ ಔದಾರ್ಯ ಬುದ್ಧಿಯನ್ನು ತೋರಿದಲ್ಲಿ ವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ.

ವಾಣಿಜ್ಯ ವ್ಯವಹಾರಗಳ ಸಂಬಂಧಪಟ್ಟ ಮುಖ್ಯವಾದ ವ್ಯಕ್ತಿಗಳನ್ನು ಭೇಟಿ ಮಾಡುವ ನಿಮ್ಮ ಕೆಲಸದಲ್ಲಿ ವಿಘ್ನ ಇರಲಿದೆ. ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಪ್ರತಿಸ್ಪರ್ಧಿಗಳು ಹುಟ್ಟುವರು.

ನಿಮ್ಮ ಪ್ರಿಯಕನಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತವಾದ ಸಮಯ. ಬಿಲ್ಡಿಂಗ್ ಕಟ್ಟಡದ ಕೆಲಸಗಳು ಪೂರ್ತಿಗೊಂಡು ಮನಸ್ಸಿಗೆ ಸಮಾಧಾನ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಸಂಜೆಯ ಸಮಯದಲ್ಲಿ ಶಿರೋವೇದನ ಕಾಡಲಿದೆ.

ಸಹಕಾರಿ ರಂಗದಲ್ಲಿನ ವ್ಯಕ್ತಿಗಳಿಗೆ ಶುಭ ದಿನ. ಆಫೀಸಿನ ತುರ್ತು ಕೆಲಸಗಳತ್ತ ಗಮನ ಕೊಡ ಬೇಕಾಗುವುದು. ಕೆಲಸದಲ್ಲಿ ವಿವೇಚನೆಯ ಕೊರತೆ ಕಂಡುಬರಲಿದೆ. ಗೆಲುವು ಸಾಧಿಸಲು ಹೆಜ್ಜೆಹೆಜ್ಜೆಗೂ ವಿವೇಚನೆ ಅಗತ್ಯವೆನ್ನುವುದನ್ನು ಮರೆಯದಿರಿ.

ಹಣಕಾಸು ಪರಿಸ್ಥಿತಿಗಳು ಉತ್ತಮಗೊಳ್ಳುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತಯಾರಿ ನಡೆಸಿಕೊಳ್ಳಿ. ಕೆಲಸದಲ್ಲಿ ಬದಲಾವಣೆ ಬಯಸಿದ್ದಲ್ಲಿ ಬೇರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗಿ. ನಿಮ್ಮಲ್ಲಿದ್ದ ಅನಿಶ್ಚತೆಯ ಭಾವ ದೂರಾಗಲಿದೆ. ಸಂತೋಷದ ಘಟನೆಗಳು ನಡೆಯುವುದು.

ಸಾಮಾಜಿಕ ಸಮಾರಂಭದಲ್ಲಿ ಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿ ಅನುಕೂಲವಾಗುವುದು. ಕಾರ್ಖಾನೆ ಕೆಲಸಗಾರರ ಬೇಡಿಕೆಗಳು ಇತ್ಯರ್ಥವಾಗಲಿದೆ. ವಾಹನ ಮಾರಾಟಗಾರರಿಗೆ ಉತ್ತಮ ಆದಾಯ ದೊರೆತು ಸಂತಸ. ಅರಣ್ಯ ಅಧಿಕಾರಿಗಳಿಗೆ ಹೆಚ್ಚಿನ ಕೆಲಸ.