ರಾಜ್ಯದಲ್ಲಿ ಕೊರೊನಾ ಸೋಂಕು ತುಸು ಏರಿಕೆ : ಗದಗ ಜಿಲ್ಲೆಯಲ್ಲಿ ಶೂನ್ಯ
ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ತುಸು ಏರಿಕೆಯಾಗಿದ್ದು ಮತ್ತು ಸಾವಿನ ಸಂಖ್ಯೆ ನಿನ್ನೆಯಷ್ಟೇ ಇದೆ. ಚೇತರಿಕೆ ಪ್ರಮಾಣ ಹೆಚ್ಚಾಗಿದೆ.
ಗದಗ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ಪ್ರಕರಣ ದಾಖಲಾಗಿಲ್ಲ.
ಉಳಿದಂತೆ ಬೀದರ್, ಕೊಪ್ಪಳ ತಲಾ 1, ವಿಜಯನಗರ, ಯಾದಗಿರಿ ಜಿಲ್ಲೆಯಲ್ಲಿ ತಲಾ 2 ಸೋಂಕು ಪ್ರಕರಣ ದೃಢಪಟ್ಟಿದೆ.
ರಾಜ್ಯದಲ್ಲಿ ಸೋಂಕಿನ ಶೇಕಡಾವಾರು ಪ್ರಮಾಣ ಶೇ. 1.30ಕ್ಕೆ ಏರಿಕೆಯಾಗಿದೆ. ಜೊತೆಗೆ ಸಾವಿನ ಪ್ರತಿಶತ ಶೇ.2.24 ಕ್ಕೆ ಕುಸಿದೆ.ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 30,082ಕ್ಕೆ ಕುಸಿದಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ 1,869 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 42 ಮಂದಿ ಸಾವನ್ನಪ್ಪಿದ್ದಾರೆ.ಜೊತೆಗೆ 3144
ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ
ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 28,82,239 ಮಂದಿಗೆ ಏರಿಕೆಯಾಗಿದೆ.ಇಲ್ಲಿಯ ತನಕ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,16,013 ಕ್ಕೆ ಹೆಚ್ಚಳವಾಗಿದೆ .
ಜೊತೆಗೆ ಒಟ್ಟಾರೆಯಾಗಿ 36,121ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ
ಹಲವು ಜಿಲ್ಲೆಗಳಲ್ಲಿ ಸೋಂಕು ತುಸು ಏರಿಕೆಯಾಗಿದ್ದು ಇನ್ನೂ ಕೆಲವು ಜಿಲ್ಲೆಗಳಲ್ಲಿ ನಿನ್ನೆಗಿಂತ ಕಡಿಮೆ ಸೋಂಕಿನ ಸಂಖ್ಯೆ ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಏರಿಕೆ,
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಗಿಂತ ಸೋಂಕು ಏರಿಕೆಯಾಗಿದ್ದು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಇಂದು 432 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 6 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ 635ಮಂದಿ ಚೇತರಿಸಿಕೊಂಡಿದ್ದಾರೆ.
1,42,ಲಕ್ಷ ಪರೀಕ್ಷೆ:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,42,856 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯ ತನಕ 3,67,27,143 ಕ್ಕೆ ಏರಿಕೆಯಾಗಿದೆ ಆರೋಗ್ಯ ಇಲಾಖೆ ತಿಳಿಸಿದೆ
ಇಂದಿನ ಸೋಂಕು ಸಂಖ್ಯೆ
ಜಿಲ್ಲೆ ಎಷ್ಟು
- ಬಾಗಲಕೋಟೆ – 4
- ಬಳ್ಳಾರಿ – 11
- ಬೆಳಗಾವಿ – 97
- ಬೆಂಗಳೂರು ಗ್ರಾಮಾಂತರ- 46
- ಬೆಂಗಳೂರು ನಗರ. – 432
- ಬೀದರ್ – 1
- ಚಾಮರಾಜನಗರ – 15
- ಚಿಕ್ಕಬಳ್ಳಾಪುರ – 13
- ಚಿಕ್ಕಮಗಳೂರು -101
- ಚಿತ್ರದುರ್ಗ – 15
- ದಕ್ಷಿಣ ಕನ್ನಡ – 218
- ದಾವಣಗೆರೆ -21
- ಧಾರವಾಡ -24
- ಗದಗ – 0
- ಹಾಸನ – 173
- ಹಾವೇರಿ – 14
- ಕಲಬುರಗಿ- 6
- ಕೊಡಗು – 51
- ಕೋಲಾರ -46
- ಕೊಪ್ಪಳ -1
- ಮಂಡ್ಯ – 37
- ಮೈಸೂರು – 2087
- ರಾಯಚೂರು -3
- ರಾಮನಗರ – 11
- ಶಿವಮೊಗ್ಗ – 83
- ತುಮಕೂರು – 92
- ಉಡುಪಿ – 94
- ಉತ್ತರ ಕನ್ನಡ – 49
- ವಿಜಯಪುರ – 2
- ಯಾದಗಿರಿ-