ಕೊರೊನಾ ಸೋಂಕು ಏರಿಕೆ, ಸಕ್ರಿಯ ಪ್ರಕರಣ ಇಳಿಕೆ
ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಸಂಖ್ಯೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ತುಸು ಇಳಿಕೆ ಕಂಡಿದೆ.ಚೇತರಿಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 24,127 ಕ್ಕೆ ಇಳಿಕೆಯಾಗಿದೆ.
ರಾಜ್ಯದಲ್ಲಿ ಸೋಂಕಿನ ಶೇಕಡಾವಾರು ಪ್ರಮಾಣ ಇಂದು ಶೇ. 1.35 ಏರಿಕೆಯಾಗಿದೆ. ಜೊತೆಗೆ ಸಾವಿನ ಪ್ರತಿಶತ ಶೇ.1.75ಕ್ಕೆ ಕುಸಿದಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ 1,705 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 30 ಮಂದಿ ಸಾವನ್ನಪ್ಪಿದ್ದಾರೆ.ಜೊತೆಗೆ 2,243 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 28,91,699 ಮಂದಿಗೆ ಏರಿಕೆಯಾಗಿದೆ.ಇಲ್ಲಿಯ ತನಕ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,31,226 ಕ್ಕೆ ಹೆಚ್ಚಳವಾಗಿದೆ .
ಜೊತೆಗೆ ಒಟ್ಟಾರೆಯಾಗಿ 36,323 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹಲವು ಜಿಲ್ಲೆಗಳಲ್ಲಿ ಸೋಂಕು ತುಸು ಏರಿಕೆಯಾಗಿದ್ದು ಇನ್ನೂ ಕೆಲವು ಜಿಲ್ಲೆಗಳಲ್ಲಿ ನಿನ್ನೆಗಿಂತ ಕಡಿಮೆ ಸೋಂಕಿನ ಸಂಖ್ಯೆ ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಇಳಿಕೆ
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಗಿಂತ ಸೋಂಕು ತುಸು ಇಳಿಕೆ .ಇಂದು 400 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 3 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ 781 ಮಂದಿ ಚೇತರಿಸಿಕೊಂಡಿದ್ದಾರೆ.
1,25 ಲಕ್ಷ ಪರೀಕ್ಷೆ:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,25,426 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯ ತನಕ 3,75,51,620 ಕ್ಕೆ ಏರಿಕೆಯಾಗಿದೆ ಆರೋಗ್ಯ ಇಲಾಖೆ ತಿಳಿಸಿದೆ
ಇಂದಿನ ಸೋಂಕು ಸಂಖ್ಯೆ
ಜಿಲ್ಲೆ ಎಷ್ಟು
- ಬಾಗಲಕೋಟೆ – 8
- ಬಳ್ಳಾರಿ – 10
- ಬೆಳಗಾವಿ – 90
- ಬೆಂಗಳೂರು ಗ್ರಾಮಾಂತರ- 43
- ಬೆಂಗಳೂರು ನಗರ. – 400
- ಬೀದರ್ – 2
- ಚಾಮರಾಜನಗರ – 30
- ಚಿಕ್ಕಬಳ್ಳಾಪುರ – 17
- ಚಿಕ್ಕಮಗಳೂರು -69
- ಚಿತ್ರದುರ್ಗ – 10
- ದಕ್ಷಿಣ ಕನ್ನಡ – 295
- ದಾವಣಗೆರೆ -20
- ಧಾರವಾಡ -6
- ಗದಗ – 3
- ಹಾಸನ – 83
- ಹಾವೇರಿ – 4
- ಕಲಬುರಗಿ- 7
- ಕೊಡಗು – 62
- ಕೋಲಾರ -34
- ಕೊಪ್ಪಳ -3
- ಮಂಡ್ಯ – 38
- ಮೈಸೂರು – 157
- ರಾಯಚೂರು -1
- ರಾಮನಗರ – 8
- ಶಿವಮೊಗ್ಗ – 74
- ತುಮಕೂರು – 72
- ಉಡುಪಿ – 131
- ಉತ್ತರ ಕನ್ನಡ – 23
- ವಿಜಯಪುರ – 4
- ಯಾದಗಿರಿ- 3