ಯಡ್ರಾಮಿ: ಗ್ರಾಮಲೆಕ್ಕಾಧಿಕಾರಿ ಜಯಶ್ರೀ ಸಂತೋಷ ಕೊಡೆಕಲ್ ಮೇಲೆ ಎಸಿಬಿ ದಾಳಿ

ಯಡ್ರಾಮಿ: ರೈತರೊಬ್ಬರ ಪಹಣಿಯ ಹೆಸರು ಬದಲಾಯಿಸಲು ಲಂಚ ಪಡೆಯುತ್ತಿದ್ದಾಗ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಯಡ್ರಾಮಿ ತಹಸೀಲ್ ಕಾರ್ಯಾಲಯದಲ್ಲಿ ನಡೆದಿದೆ.

ಗ್ರಾಮಲೆಕ್ಕಾಧಿಕಾರಿ ಜಯಶ್ರೀ ಸಂತೋಷ ಕೊಡೆಕಲ್ ಎಂಬುವವರು ರೈತರೊಬ್ಬರಿಂದ 7 ಸಾವಿರ ರೂ. ಹಣ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಕಣಮೇಶ್ವರ ಗ್ರಾಮದ ರೈತರು ತಮ್ಮ ಪಹಣಿಯ ಹೆಸರು ಬದಲಾವಣೆ ಮಾಡಲು ಪ್ರತಿನಿತ್ಯ ಅಲೆದರೂ ಕೂಡ ಈ ಗ್ರಾಮಲೆಕ್ಕಾಧಿಕಾರಿ ಕೆಲಸ ಮಾಡಿರಲಿಲ್ಲ.

ಈ ಗ್ರಾಮಲೆಕ್ಕಾಧಿಕಾರಿಯೇ ಪಹಣಿಯ ವಿಷಯ ನಿರ್ವಾಹಕಿಯಾಗಿದ್ದರಿಂದ ಹಲವು ದಿನಗಳಿಂದ ರೈತನಿಗೆ ಹಣದ ಬೇಡಿಕೆ ಇಟ್ಟಿದ್ದರು. ಕೊನೆಗೆ ಬೇಸತ್ತ ರೈತ ಎಸಿಬಿಗೆ ದೂರು ನೀಡಿದ್ದ. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಎಸಿಬಿ ಡಿವೈಎಸ್ಪಿ ಮಹೇಶ ಮೇಘಣ್ಣವರ ನೇತ್ರತ್ವದ ತಂಡ ದಾಳಿ ಮಾಡಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *