ಝೆಡ್ ಭದ್ರತೆ ಬೇಡ, ಅಮಿತ್ ಶಾಗೆ ಬಿಎಸ್ ವೈ ಮನವಿ! ಕಾರಣವೇನು?

ಹೈಲೈಟ್ಸ್‌:

  • ಜೀವ ಬೆದರಿಕೆ ಸಾಧ್ಯತೆ ಹಿನ್ನಲೆಯಲ್ಲಿ ನೀಡಲಾಗಿದ್ದ ಝೆಡ್ ಭದ್ರತೆಯನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿರಾಕರಿಸಿದ್ದಾರೆ.
  • ಭದ್ರತೆಯ ಬಗ್ಗೆ ನಾನಾ ಆಯಾಮದಲ್ಲಿ ಚರ್ಚೆ ನಡೆಯುತ್ತಿತ್ತು. ಬಿಎಸ್ ವೈ ಚಟುವಟಿಕೆ ಮೇಲೆ ನಿಗಾ ಇಡಲು ಕೇಂದ್ರದ ಭದ್ರತೆ ನೀಡಲಾಗುತ್ತಿದೆ ಎಂದೂ ವ್ಯಾಖ್ಯಾನಿಸಲಾಗಿತ್ತು.
  • ನಾನು ಜನಸಾಮಾನ್ಯರ ನಡುವೆ ಇರುವವನು. ಝೆಡ್ ಶ್ರೇಣಿಯ ಸೆಕ್ಯುರಿಟಿ ಇದ್ದರೆ ಅಕ್ಕ ಪಕ್ಕ ಯಾರಾದರೂ ಓಡಾಡಲು ಆಗಲ್ಲ ಎಂದರು.

ಬೆಂಗಳೂರು: ಜೀವ ಬೆದರಿಕೆ ಸಾಧ್ಯತೆ ಹಿನ್ನಲೆಯಲ್ಲಿ ನೀಡಲಾಗಿದ್ದ ಝೆಡ್ ಭದ್ರತೆಯನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿರಾಕರಿಸಿದ್ದಾರೆ. ಹೌದು, ಝೆಡ್ ಶ್ರೇಣಿಯ ಭದ್ರತೆ ಬೇಡ ಎಂದು ಕೇಂದ್ರ ‌ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ.

ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಬಿಎಸ್ ಯಡಿಯೂರಪ್ಪ ಅವರಿಗೆ ಝೆಡ್ ಭದ್ರತೆ ನೀಡಲು ನಿರ್ಧಾರ ಮಾಡಲಾಗಿತ್ತು. ಜೀವ ಬೆದರಿಕೆ ಸಾಧ್ಯತೆ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ನೀಡಲು ನಿರ್ಧಾರ ಮಾಡಲಾಗಿತ್ತು.

ಆದರೆ ಯಡಿಯೂರಪ್ಪ ಅವರಿಗೆ ನೀಡಲಾಗಿರುವ ಭದ್ರತೆಯ ಬಗ್ಗೆ ನಾನಾ ಆಯಾಮದಲ್ಲಿ ಚರ್ಚೆ ನಡೆಯುತ್ತಿತ್ತು. ಬಿಎಸ್ ವೈ ಚಟುವಟಿಕೆ ಮೇಲೆ ನಿಗಾ ಇಡಲು ಕೇಂದ್ರದ ಭದ್ರತೆ ನೀಡಲಾಗುತ್ತಿದೆ ಎಂದೂ ವ್ಯಾಖ್ಯಾನಿಸಲಾಗಿತ್ತು.

ಆದರೆ ಈ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಯಡಿಯೂರಪ್ಪ, ನನಗೆ ಝೆಡ್ ಭದ್ರತೆ ಬೇಡ. ಈಗ ಇರುವ ಭದ್ರತೆ ಸಾಕು. ನಾನು ಜನಸಾಮಾನ್ಯರ ನಡುವೆ ಇರುವವನು. ಝೆಡ್ ಶ್ರೇಣಿಯ ಸೆಕ್ಯುರಿಟಿ ಇದ್ದರೆ ಅಕ್ಕ ಪಕ್ಕ ಯಾರಾದರೂ ಓಡಾಡಲು ಆಗಲ್ಲ ಎಂದರು.

ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದೇನೆ. ನನಗೆ ಹೆಚ್ಚುವರಿ ಭದ್ರತೆ ಬೇಡ. ಈಗ ಇರುವ ಭದ್ರತೆ ಸಾಕು ಎಂದಿದ್ದೇನೆ‌ ಎಂದು ತಿಳಿಸಿದರು.

ಹೇಗಿರುತ್ತೆ ಝೆಡ್ ಶ್ರೇಣಿ ಭದ್ರತೆ

ಝೆಡ್ ಶ್ರೇಣಿ ಭದ್ರತೆಯಲ್ಲಿ ಒಟ್ಟು 22 ಸಿಬ್ಬಂದಿ ಇರುತ್ತಾರೆ. ಈ ಪೈಕಿ 4 ರಿಂದ 5 ಕಮಾಂಡೋಗಳು ಇರ್ತಾರೆ. ಇನ್ನು ಝೆಡ್ ಪ್ಲಸ್ ಶ್ರೇಣಿಯಲ್ಲಿ 55 ಸಿಬ್ಬಂದಿ ಭದ್ರತೆ ಇರುತ್ತದೆ. ಈ ಪೈಕಿ 10+ ಕಮಾಂಡೋಗಳು ಇರ್ತಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *