ಬಳ್ಳಾರಿ: ದೇವರು ಹೇಳಿದ್ದಾನೆಂದು ನಂಬಿಸಿ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಚರ್ಚ್‌ ಫಾದರ್!

ಹೈಲೈಟ್ಸ್‌:

  • ಅಪ್ರಾಪ್ತ ಬಾಲಕಿಗೆ ತಾಳಿಕಟ್ಟಿದ ಚರ್ಚ್ ಫಾದರ್‌!
  • ದೇವರು ಹೇಳಿದ್ದಾನೆಂದು ನಂಬಿಸಿ ಫಾದರ್‌ನಿಂದ ಕೃತ್ಯ
  • ಬಳ್ಳಾರಿಯಲ್ಲಿ ಘಟನೆ; ಆರೋಪಿ ಫಾದರ್ ನಾಪತ್ತೆ

ಬಳ್ಳಾರಿ: ದೇವರು ಹೇಳಿದ್ದಾನೆಂದು ನಂಬಿಸಿದ 30 ವರ್ಷದ ಫಾದರ್‌ವೊಬ್ಬರು, ಚರ್ಚ್‌ಗೆ ಪ್ರಾರ್ಥನೆ ಸಲ್ಲಿಸಲು ತಾಯಿಯೊಂದಿಗೆ ಬಂದಿದ್ದ 17 ವರ್ಷದ ಬಾಲಕಿಗೆ ತಾಳಿ ಕಟ್ಟಿದ ವಿಲಕ್ಷಣ ಘಟನೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಮೇ 14ರಂದು ಈ ಬಾಲಕಿ, ತನ್ನ ತಾಯಿಯೊಂದಿಗೆ ಪ್ರಾರ್ಥನೆ ಸಲ್ಲಿಸಲು ಚರ್ಚ್‌ಗೆ ಎಂದಿನಂತೆ ಬಂದಿದ್ದಳು. ಈ ವೇಳೆ ಚರ್ಚ್ ಫಾದರ್‌, ದೇವರು ನಿನಗೆ ತಾಳಿಕಟ್ಟುವಂತೆ ಹೇಳಿದ್ದಾನೆ ಎಂದು ಹೇಳಿ, ಬಾಲಕಿಗೆ ಚರ್ಚ್‌ನಲ್ಲಿಯೇ ದಿಢೀರ್‌ ತಾಳಿ ಕಟ್ಟಿದ್ದಾನೆ. ಇದರಿಂದ ವಿಚಲಿತರಾದ ತಾಯಿ ಹಾಗೂ ಮಗಳು ಮನೆಗೆ ತೆರಳಿ ಗ್ರಾಮದ ಮುಖಂಡರಿಗೆ ಮಾಹಿತಿ ನೀಡಿದ್ದಾರೆ.

ಚರ್ಚ್ ಫಾದರ್‌ ವಿರುದ್ಧ ತೆಕ್ಕಲಕೋಟೆ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ಸಿರಿಗೇರಿ ಠಾಣೆಗೆ ವರ್ಗಾಯಿಸಲಾಗಿದೆ. ಬಾಲಕಿಯ ತಾಯಿ ನೀಡಿದ ಹೇಳಿಕೆ ಆಧರಿಸಿ, ಚರ್ಚ್ ಫಾದರ್‌ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಪತ್ತೆಗೆ ಜಾಲಬೀಸಿದ್ದಾರೆ. ತನಿಖೆ ಮುಂದುವರಿದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *